Friday, May 1, 2009

Kolaj

Naaನು ಸತ್ತು ಹೋಗಿದ್ದೆ.

ಹಾಸ್ಪಿಟಲ್ uniform ಧರಿಸಿದ್ದ ಇಬ್ಬರು ವಾರ್ಡ್ ಬಾಯ್ ಗಳು ಸ್ಟ್ರೆಚರ್ ಮೇಲೆ ಮಲಗಿಸಿಕೊಂಡು ತಂದು ಗಾಡಿಯಲ್ಲಿ ಮಲಗಿಸಿದರು. ನಿಟ್ಟುಸಿರು ಬಿಟ್ಟ ಡ್ರೈವರ್ ಡೋರ್ ಕ್ಲೋಸ್ ಮಾಡಿ ಗಾಡಿ ಸ್ಟಾರ್ಟ್ ಮಾಡ್ದಾ. ನನ್ನ ಪಕ್ಕ ಕುಳಿತ ವಾರ್ಡ್ ಬಾಯ್ ಡ್ರೈವರ್ ಗೆ '' ಶಿವೂ, ಕೋಣನ ಕುಂತೆ ಕ್ರಾಸ್ ಮನೆ.... ಫೋನ್ ಮಾಡಿದೀನಿ... ನಿಧಾನಕ್ಕೆ ಓಡ್ಸು'' ಅಂದ. ಪ್ರತಿಯಾಗಿ ಡ್ರೈವರ್ '' ಸರಿ, ಏನ್ ಬೊಮ್ಮನ್ ಫ್ಯಾಮಿಲಿ ನಾ ಈಯಪ್ಪಂದು ? '' ಅಂದ. '' ಇರಬೇಕೇನೋ ? ಮುಖ ನೋಡಿದ್ರೆ ಅಂಗೆ ಅನ್ನಿಸ್ತದೆ, ಈ ವಾರದಲ್ಲಿ ಇದು ಮೂರ್ನೆದೂ... ಆದ್ರೂ ಅಡ್ಮಿಟ್ ಅಗೋ ಜನಾ ಕಂಮಿಯಗಲ್ಲ ನೋಡು !'' '' ಅಯ್ಯೋ ! ಸುಮ್ನಿರು ಗುರು ಹೆಣ ಬಿದ್ರೇನೆ ನಮಗ್ ಊಟಾ... ಒಸಿ ಬೇಜಾರಾಯ್ತದೆ... ಆದ್ರೆ ನಮ್ ಹೆಂಡ್ರು-ಮಕ್ಳು ಗಳು ಬದುಕ್ಬ್ಯಾದ್ವಾ.? '' ಅಂದ ಮಾಡರ್ನ್ ಸತ್ಯ ಹರಿಶ್ಚಂದ್ರ.

ನನಗೆ ಹೆಚ್ಚಿಗೇನು ಆಶ್ಚರ್ಯ ಆಗ್ಲಿಲ್ಲ. ಇದಕ್ಕಿಂತ ಹೆಚ್ಚಿನ ಕ್ರುಎಲ್ ರಿಯಾಲಿಟಿ ಗಳನ್ನೂ ಈಗಾಗಲೇ ನೋಡಿ ಬಿಟ್ಟಿದ್ದರಿಂದ. ಗಾಡಿ ಲಾಲ್ ಬಾಗ್ ಮೇನ್ ಗೇಟ್ ಬಳಿ ಟರ್ನ್ ತಗೊಂಡು ಬಸವನಗುಡಿ ಕಡೆಗೆ ಓಡತೊಡಗಿತು. ನನ್ನ ಜೀವನದ ಪ್ರಮುಖ ಘಟನೆಗಳಿಗೆ ಕಾರಣವಾದ ಗಾಂದಿ ಬಜಾರ ದ ಮೂಲಕ ಈ ಪರಿಸ್ಥಿತಿಯಲ್ಲಿ ಹೋಗ್ತಾ ಇರೋದು ನೋಡಿ ಒಂಥರಾ ಖುಷಿ ಯಾಗೆ ಇತ್ತು. ಬುದ್ದಿಯೇಲ್ಲದ ಜನ ಉಸಿರಾಡೋದು ನಿಲ್ಲಿಸಿದ ಕುಡ್ಲೆ ಮನುಷ್ಯ ಸತ್ತು ಹೋಗ್ತಾನೆ ಅಂತಾರೆ. ನಾನು ಸತ್ತೆ ಇಲ್ಲ ! ಎಲ್ಲಾ ನೋಡ್ತಾಯಿದೀನಿ, ಎಲ್ಲಾ ಕೇಳಿಸ್ತಾನೇ ಇದೆ. ಹೇಗೂ ಮನೆಗ್ ಹೋಗ್ತಿವಲ್ಲಾ ಅಲ್ಲಿ ಹೇಳಿದರಾಯ್ತು ಅಂತ ಸುಮ್ನೆ ಇದೀನಿ. ಅಮ್ಮ-ಅಕ್ಕ-ಶರಣ್ಯ ಇರ್ತಾರೆ, ಅಣ್ಣ as usual ಆಫೀಸ್ ಅಲ್ಲೇ ಇರ್ತಾನೆ. ಅಲ್ಲಿ ಹೇಳಿದ್ರಾಯ್ತು ಇದನೆಲ್ಲಾ, ' ಮನುಷ್ಯ ಸಾಯೋದು ಆಯಸ್ಸು ತೀರಿಯಲ್ಲ-ಆಸೆಗಳು ತೀರಿ'' ಅಂತ. ಗಾಡಿ ನ್ಯಾಷನಲ್ ಕಾ-ಆಪರೇಟಿವ್ ಬ್ಯಾಂಕ್ ಹತ್ರ ಸಿಗ್ನಲ್ ಗಾಗಿ ನಿಂತಿತು.
ಅರೆ ! ಮರೆತೇ ಹೋಗಿತ್ತು. ಈ ಬ್ಯಾಂಕ್ ಗೆ ನಾನು ಮೆಂಬರ್, ಎರಡು ವರ್ಷ ಗಳಿಂದ ಈ ಕಡೆ ತಲೇನೆ ಹಾಕಿಲ್ಲ. ಡಿವಿಡೆಂಡ್ ಕೂಡ ತಗೊಂಡಿಲ್ಲ. ಶರಣ್ಯಂಗೆ ಹೇಳ್ಬೇಕು ''ನೋಡು, ನಾನು ಸತ್ರೆ ಇದ್ನೆಲ್ಲಾ ಆದಷ್ಟು ಬೇಗ claim ಮಾಡ್ಕೋ, ಮೂರನೆ ವರ್ಶಾನು ಡಿವಿಡೆಂಡ್ ತಗೊಳ್ದೆ ಇದ್ರೆ ರಿಸರ್ವ್ ಫಂಡ್ ಗೆ ಟ್ರಾನ್ಸ್ಫರ್ ಮಾಡಿ ಬಿಡ್ತಾರೆ, ಹಾಗೆ LIC ಪಾಲಿಸಿಗಳಿಗೆ ಅಮ್ಮನ nominy ಮಾದೆದೀನಿ, ನಮ್ಮ ಮ್ಯಾರೇಜ್ ರೆಗಿಸ್ತ್ರಶನ್ ಸರ್ಟಿಫಿಕೇಟ್ produce ಮಾಡಿ claim ಮಾಡು, ಹಾಗೆ ಬ್ಯಾಂಕ್ accounts, ಗ್ರಾಚುತಿ , PF ದೂ ಕೂಡ. ಕಾರ್ ಲೋನ್ NOC ಬಂತಾ ? ಛೆ ! ಎಷ್ಟೊಂದು ಕೆಲ್ಸಾ ? ಹಾಗೇ Diary ನಲ್ಲಿ ಅರುಣ್, ಅಖಿಲ ಫೋನ್ ನಂಬರ್ ಇದೆ. ಏನಾದ್ರೂ ಹೆಲ್ಪ್ ಬೇಕಾದ್ರೆ . ಅಥವಾ ನಿಮ್ ತಂದೇನ ಒಂದೆರಡು ದಿನ ಬಂದು ಇರೋಕೆ ಹೇಳು.

ಅಯ್ಯೋ ! ಇದೆಲ್ಲಾ ನಾನು ಸತ್ತು ಹೋಗಿದೀನೀ ಅಂತ ಹೇಳ್ತಿಲ್ಲ ಮಾರಾಯ್ತಿ. ಸತ್ತಾಗ ನಿನಗೆ easy ಯಾಗಲೀ ಅಂತ ಹೇಳ್ತಾ ಇರೋದು. ಪಾಪಿ ಚಿರಾಯು ಕಣೇ ! ನಿನ್ನ ಕೆನ್ನೆ ಗಿಲ್ಲಿ-ಜಡೆ ಎಳೆದು ಇನ್ನು ಎಷ್ಟು ವರ್ಷ ಗೋಳು ಹುಯ್ಕೊಬೇಕೋ ಏನೋ ? ಇನ್ನು ನಾಲ್ಕು ಸ್ಕ್ರಿಪ್ಟ್ ಬಾಕಿ ಇದೆ. ಇನ್ನು ಎಷ್ಟೊಂದು ನಾಟ್ಕ ನೋಡ್ಬೇಕು ? ನೀನ್ ಬೇರೆ ಮತ್ತೆ ಡಾನ್ಸಿಗೆ ಸೇರ್ತಿನೀ ಅಂತಿದ್ಯಾ ! ನಿನ್ನ ಪ್ರಾಕ್ಟೀಸ್ ಗೆ ಅಂತ ಒಂದು ಹಾಲ್ ಕಟ್ಟಿಸಿಕೊಡ್ಬೇಕು... ಹಂಪ್ ಬಂತು ಅಂತ ಡ್ರೈವರ್ ಸಡನ್ ಬ್ರೇಕ್ ಹಾಕ್ದ, ವಾರ್ಡ್ ಬಾಯ್ ಬೀಳೋಕೆ ಹೋಗಿ ಸಂಭಾಳಿಸಿಕೊಂಡು ''ಶಿವೂ, ಹುಶರಪ್ಪ ಒಳಗೆ ಹೆಣ ಒಂದೇ ಅಲ್ಲಾ, ನಾನು ಇದೀನೀ ?'' ಅಂದ. ತೆಗೆದು ಬಾರಿಸಿಬಿಡೋಣ ಅನ್ನಿಸ್ತಾ ಇತ್ತು . ಪಾಪಿ ! ಹೆಣ ಅಂತಾನೆ. ಇನ್ಯಾವತ್ತು ಇವರ ಹಾಸ್ಪಿಟಲ್ ಗೆ ಕಾಲಿಡಬಾರದು. ಮನೇನೂ ಬಂತಲ್ಲಾ, ಶರಣ್ಯಂಗೆ ಹೇಳ್ಬೇಕು '' ಸುಂದ್ರಮ್ಮ, ಕೋಪ ಇದ್ರೆ ಬಯ್ದು ತೀರೀಸಿಕೋ, ಹಿಂಗೆಲ್ಲ ಡಬ್ಬ ಹಾಸ್ಪಿಟಲ್ ಗೆ ಸೇರಿಸಬೇದಾಂತ !'' ಮನೆ ಮುಂದೆ ಗಾಡಿ ನಿಲ್ತು. ಅಮ್ಮ ಅಳ್ತಾ ಇರೋದು ಕೇಳಿಸ್ತಾ ಇತ್ತು . ಅಷ್ಟರಲ್ಲಿ ಶರಣ್ಯ ಓಡಿಬಂದವಳು ಗೇಟಿನ ಬಳಿ ನಿಂತು ತಲೆ ಎತ್ತಿ ''ಅಮ್ಮಾ ! ಬಾಡಿ ಬಂತು'' ಅಂದ್ಲು.ಆಗ ಬಂತು ನನಗೆ ಸಾವು. ಕಾಲ ಒಮ್ಮೆಗೇ ಸ್ತಂಭಿಸಿದ ಹಾಗೇ... ಅಲ್ಲಿಯವರೆಗೂ ಕಾಣಿಸುತ್ತಾ ಇದ್ದದ್ದು-ಕೇಳಿಸುತ್ತಾ ಇದ್ದದ್ದು ಒಮ್ಮೆಲೇ ಸ್ತಬ್ಧ ಗೊಂಡು ನನ್ನ ಸಾವಿಗೆ ಅಧಿಕೃತ ವಾಗಿ ಚರಮಗೀತೆ ಹಾಡಿತು. ಕಣ್ಣಿನ ಅಂಚಿನಿಂದ ಹರಿದ ಎರಡು ಹನಿ ಕಣ್ಣೀರು ಒರೆಸುವವರಿಲ್ಲದೆ ಕೆನ್ನೆಯ ಮೇಲೆ ಕರೆಗಟ್ಟತೊಡಗಿತು. ನಾನು ಸತ್ತು ಹೋಗಿದ್ದೆ

2 comments:

  1. Idhanna Oodhi nanna Maatu kuuda SaToythu.. E kathe ya Saaramsha "jeevandalli yaar baggenu yavudhar baggenu athiyaadha mooha, Aase ithkobaardhu, Nammagoskaara naavu badhuka beeku bereavarigalla". nimmagoskaara neeev badhukidhre neevu Saaythirlilla madhu, chiranjeevi agthidre :)

    ReplyDelete