Wednesday, May 20, 2009

Gift


you are in love with me,
I shall make you perpelexed

Do not build much,
for I intend to have you in ruins
If you build two hundred houses in a manner that bees do,
I shall make you as homeless as a fly,
If you are the mount Qraf in stability,
I shall make you whirl like a millstone.

- Rumi


ಉಡುಗೊರೆ
('ಮಳೆ'ಯಿಂದ 'ಹನಿ'ಗೆ...)

ಹೆಚ್ಚಿಗೇನೂ ಕಟ್ಟಬೇಡ
ನಿನ್ನನ್ನುಳಿಸುವೆ ಶಿಥಿಲಗಳ ನಡುವೆ
ಜೇನಿನಂತೆ ನೂರಿನ್ನೂರು ಮನೆ ಕಟ್ಟಿದಲ್ಲಿ,
ಸೂರಿಲ್ಲದ ನೊಣವಾಗಿಸುವೆ.
ಪರ್ವತದಷ್ಟು ಅಚಲವಾಗಿದ್ಡೋದೇ
ತಿರುಗಿಸುವೆ ರಾಗಿಕಲ್ಲಾಗಿಸಿ ಗಿರ್ರನೆ.

ನನ್ನನ್ನೇ ಪ್ರೀತಿಸಿದರೆ
ತಬ್ಬಿಬ್ಬಾಗಿಸುವೆ ನಿನ್ನನ್ನೇ !


Saturday, May 16, 2009

Ninnolumeyindale...

'ಊರು ಬಿಡ್ಬೇಕು...'

ಹೌದು, ಬೇರೆ ದಾರಿಯಿಲ್ಲ, ಇಲ್ಲಿದ್ರೆ ಕಿತ್ತು ತಿನ್ನೋ ನೆನಪುಗಳಿಂದ ನನಗೆ ಮುಕ್ತಿನೇ ಇಲ್ಲ. ಯಾವ ರಸ್ತೆಗೆ ಹೋದ್ರು ಯಾವತ್ತೋ ಅವ್ಳು ಈ ರಸ್ತೇಲಿ ಓಡಾಡಿದ್ದು ಅನ್ನೋದು ನೆನಪಾಗುತ್ತೆ. ಮನಸ್ಸು ಬೇಡ ಬೇಡವೆಂದರು ಕೇಳದೆ ನೆನಪುಗಳಿಗೆ ಜೋತುಬೀಳತ್ತೆ. ಯಾಕೆ ಸುಮ್ನೇ ಈ ನರಳಿಕೆ. ಒಂದು ಲೆಟರ್ ಬರೆದು ಇಟ್ಕೊಂಡು ಈ ಸರ್ತಿ ಸಿಕ್ಕಾಗ ಕೊಟ್ಟು ಬಿಡಬೇಕು... ಅವಳೇ ನಿರ್ಧಾರ ಮಾಡ್ಲಿ. ಹೌದು ! ಅದೇ ಸರಿ. ಆ ಲೆಟರ್ ನಲ್ಲಿ ಎಲ್ಲ ಬರೆದು ಬಿಡಬೇಕು...

''ನೋಡು ! ನಿನ್ನನ್ನ ಇಷ್ಟ ಪಡೋವ್ರು ಬೇಕಾದಷ್ಟು ಜನಾ ಇರಬಹುದು, ಆದ್ರೆ ನನ್ನಷ್ಟು ಪ್ರೀತಿಸೋವ್ರು , ರೆಸ್ಪೆಕ್ಟ್ ಕೊಡೋರು ಇನ್ಯಾರು ಸಿಗೋದಿಲ್ಲ... ನನ್ನ ಪಾಲಿಗೆ ನೀನು ಕೇವಲ ಇಷ್ಟ ಪಟ್ಟ ಹುಡುಗಿಯಲ್ಲ... ನೀನೆ ಗುರಿ.., ನೀನೆ ಗಮ್ಯ.., ನನ್ನ ಪ್ರತಿ ಮುಂಜಾವು ಶುರುವಾಗೋದು ನಿನ್ನ ನೆನಪಿನೊಂದಿಗೆ.. , ನನ್ನ ಒಟ್ಟು ಕನಸುಗಳ ಮೂರ್ತ ರೂಪ ನೀನು... ಅಮ್ಮ ಹಾಕೋ ಕೈ ತುತ್ತು... ನೋಟ್ ಬುಕ್ಕಲ್ಲಿ ಮರಿ ಹಾಕಿಸಲು ಇತ್ತುಕೊಳ್ತಿದ್ದ ಸಾವಿರ ಕಣ್ಣಿನ ನವಿಲು ಗರಿ, ಸಂಜೆ ವೇಳೆ ಸುರಿಯೋ ಅಡ್ಡ ಮಳೆ... ಮಳೆ ಬಿದ್ದಾಗ ಏಳೋ ಮಣ್ಣ ವಾಸನೆ... ನೀನು 'ಮಳೆ'ಯಾದರೆ, ನಾನು 'ಹನಿ'... ನೀನು ಸಮುದ್ರವಾದರೆ... ನಾನು ಮರಳ ದಂಡೆಯ ಮೇಲೆ ಪುಟ್ಟ ಮಕ್ಕಳು ಕಟ್ಟಿದ ಕಪ್ಪೆ ಗೂಡು... ಯಾವಾಗಲೋ ಒಮ್ಮೆ ಇದ್ದಕ್ಕಿಂದಂತೆ ನೆನಪಾಗೋ ಮಧುರ ಹಾಡು... ದೇವಾಸ್ಥಾನದ ದೀಪದ... '' hello, hello...hold on... gimme a break... ಸಣ್ಣ ಹುಡುಗಿ ಅವ್ಳು, ಗಮ್ಯ-ಗುರಿ ಅಂತೆಲ್ಲ ಬರೆದು ಗಾಬರಿ ಮಾಡ್ಬೇಡ, ಅದು ಅಲ್ದೆ ಅವ್ರ ಮನೆ ದೇವರು ಬೇರೆ ಉಗ್ರ ನರಸಿಂಹ... ಗೊತ್ತಲ್ಲ ! easyಯಾಗಿ ಅರ್ಥ ಆಗೋ ಹಾಗೆ ಬರಿ '' ಅಂತ order ಮಾಡ್ತು ನನ್ನ ಮನಸ್ಸು. ಸರಿ ಅನ್ನಿಸಿ ಸರಳವಾಗಿ ಬರೆಯೋಕೆ ಕೂತೆ. ಸುಮ್ನೆ ಯಾಕೆ ಸುತ್ತಿ ಬಳಸಿ ಬರೆಯೋದು. ನೇರವಾಗಿ ಮೂರೂ-ಮತ್ತೊಂದು ಪ್ರಶ್ನೆ ಕೇಳಿ openion ತಗೊಂಡ್ರೆ ಆಯ್ತು. ನಮ್ಮ ad-mediaದಲ್ಲಿ ಇದನ್ನೇ ತಾನೇ ಮಾಡೋದು - KISS (Keep it short & sweet). ಹಾಗೆ ಬರೆದು ಕೇಳಿದ್ರೆ ಆಯಿತು ಅಂತ ಈ ಕೆಳಗಿನ ಪ್ರಶ್ನೆಗಳನ್ನು ಬರೆದು ಇಟ್ಟುಕೊಂಡೆ. ... ಇದಾಗಿ ಮೂರೂ ದಿನ ಆದ್ರೂ ಅವ್ಳು ಸಿಕ್ಕಲಿಲ್ಲ... ಜೇಬಲ್ಲಿ ಬೆಂಕಿ ಇಟ್ಟುಕೊಂಡ feeling ನಂಗೆ. ಕಡೆಗೆ as usual ಗಾಂಧೀ ಬಜಾರ್ನಲ್ಲಿ ಸಿಕ್ಕಾಗ ನಿಲ್ಲಿಸಿ-ಮಾತಾಡಿ ಲೆಟರ್ ಕೊಟ್ಟೆ. ಓದಿ ಆಮೇಲೆ ಯೋಚಿಸಿ ಬರೆದು ಕೊಡೋದಾಗಿ ಹೇಳಿ ತೊಗೊಂಡು ಹೋದಳು. ಅವ್ಳು ಆ letterಗೆ ಉತ್ತರ ಬರೆದು ಕಲಿಸೋ ಅಷ್ಟರಲ್ಲಿ ನನಗೆ ಸಾಕು ಸಾಕಾಗಿ ಹೋಗಿತ್ತು. ಕಡೆಗೂ ಅವ್ಳು ಉತ್ತರ ಕೊಟ್ಳು !

ಅದು...

1) ಇಷ್ಟು ದಿನಗಳ interaction ನಲ್ಲಿ ಒಂದು ದಿನ, atleast ಒಂದು ಕ್ಷಣನು ನನ್ನ ಮೇಲೆ ಪ್ರೀತಿ ಹುಟ್ಟಲಿಲ್ವಾ ?

ಇಲ್ಲಾ

2) ನಾನು ನಿನಗೆ ಸಿಗದೇ ಇದ್ದಾಗಲೂ ನೀನು ಸುಖಾವಾಗಿ ಇರ್ತ್ಯಾ ?

ಇರಬಲ್ಲೆ

3) suppose... suppose ನಾನು ನಿಮ್ಮ ತಂದೆ-ತಾಯಿನಾ ಈ ಮದ್ವೆಗೆ ಒಪ್ಪಿಸಿದರೆ ನೀನು ನನ್ನ ಸಂಗಾತಿಯಾಗಿ ಇರ್ತ್ಯಾ ?

ಇಲ್ಲಾ

4) ನಿನ್ನ ಪ್ರೀತಿಗೆ ನಾನು ಅರ್ಹನಲ್ಲ ಅಂತ ನಿನಗೆ ನಿಜಕ್ಕೂ ಅನ್ಸಿದ್ರೆ ನನ್ನ ನೆನಪು ಮಾಡಿಕೊಳ್ದೆ ಇರ್ತ್ಯಾ ?

ಇರ್ತಿನಿ

ಇದನ್ನು ಓದಿ ನೀವು ಅವ್ಳು-ಅವ್ನಿಗೆ ಸಿಗೋಲ್ಲ ಅಂತ easyಯಾಗಿ ತಿರ್ಮಾನಕ್ಕೆ ಬಂದು ಬಿಡ್ತೀರಿ. ಅದು ನಿಮಗೆ ಸುಲಭ ಕೂಡ. ಆದ್ರೆ ಪ್ರೀತಿಸ್ತಾ ಇರೋದು ನಾನು ನೋಡಿ ಹಾಗಾಗಿ ಈ ದೇಹ ಸತ್ತು ಮಣ್ಣಿಗೆ ಸೇರೋವರೆಗೆ ಪ್ರೀತಿಸ್ತಾನೆ ಇರೋದು ಅನಿವಾರ್ಯ. ಅದು ಅಲ್ದೆ ಎಷ್ಟೆಲ್ಲಾ management training attend ಮಾಡಿದೀನಿ. Life ಬಗ್ಗೆ ಎಷ್ಟೆಲ್ಲಾ postive ಆಗಿ ಇದ್ದೀನಿ. ಅದು ಅಲ್ದೆ ಅವ್ಳು ಬರೆದು ಕೊಟ್ಟಿರೋದನ್ನಾ ಸ್ವಲ್ಪ detail ಆಗಿ ಓದಿ ನೋಡಿ..... ಹಾಗಲ್ಲಾ.. ನೀವು ತಪ್ಪು ತಪ್ಪಾಗಿ ಓದ್ತಾ ಇದೀರಾ.. ನೀವು 'ಮೇಲಿನಿಂದ-ಕೆಳಕ್ಕೆ' ಓದ್ತಾ ಇದೀರಾ.... ಅದೇ 'ಕೆಳಗಿನಿಂದ-ಮೇಲಕ್ಕೆ' ಒಮ್ಮೆ ಓದಿಕೊಂಡು ಹೋಗಿ !

... ನಿಜವಾದ ಪ್ರೀತಿ ಅಂದ್ರೆ ಇದು.. wish me good luck ! ಕಾಯ್ತೀನಿ ಅವ್ಳು ಸಿಗೋವರೆಗೂ..., after all ಇನ್ನು ಬದುಕಿರೋದಾದ್ರು ಎಷ್ಟು ವರ್ಷಾ ?

ಅಂದ್ಹಾಗೆ! ಬೆಂಗಳೂರಲ್ಲಿ ಸೈಟ್ ರೇಟುಗಳು ಕಮ್ಮಿಯಾಗಿದೆಯಂತೆ ಹೌದಾ !

Friday, May 1, 2009

Kolaj

Naaನು ಸತ್ತು ಹೋಗಿದ್ದೆ.

ಹಾಸ್ಪಿಟಲ್ uniform ಧರಿಸಿದ್ದ ಇಬ್ಬರು ವಾರ್ಡ್ ಬಾಯ್ ಗಳು ಸ್ಟ್ರೆಚರ್ ಮೇಲೆ ಮಲಗಿಸಿಕೊಂಡು ತಂದು ಗಾಡಿಯಲ್ಲಿ ಮಲಗಿಸಿದರು. ನಿಟ್ಟುಸಿರು ಬಿಟ್ಟ ಡ್ರೈವರ್ ಡೋರ್ ಕ್ಲೋಸ್ ಮಾಡಿ ಗಾಡಿ ಸ್ಟಾರ್ಟ್ ಮಾಡ್ದಾ. ನನ್ನ ಪಕ್ಕ ಕುಳಿತ ವಾರ್ಡ್ ಬಾಯ್ ಡ್ರೈವರ್ ಗೆ '' ಶಿವೂ, ಕೋಣನ ಕುಂತೆ ಕ್ರಾಸ್ ಮನೆ.... ಫೋನ್ ಮಾಡಿದೀನಿ... ನಿಧಾನಕ್ಕೆ ಓಡ್ಸು'' ಅಂದ. ಪ್ರತಿಯಾಗಿ ಡ್ರೈವರ್ '' ಸರಿ, ಏನ್ ಬೊಮ್ಮನ್ ಫ್ಯಾಮಿಲಿ ನಾ ಈಯಪ್ಪಂದು ? '' ಅಂದ. '' ಇರಬೇಕೇನೋ ? ಮುಖ ನೋಡಿದ್ರೆ ಅಂಗೆ ಅನ್ನಿಸ್ತದೆ, ಈ ವಾರದಲ್ಲಿ ಇದು ಮೂರ್ನೆದೂ... ಆದ್ರೂ ಅಡ್ಮಿಟ್ ಅಗೋ ಜನಾ ಕಂಮಿಯಗಲ್ಲ ನೋಡು !'' '' ಅಯ್ಯೋ ! ಸುಮ್ನಿರು ಗುರು ಹೆಣ ಬಿದ್ರೇನೆ ನಮಗ್ ಊಟಾ... ಒಸಿ ಬೇಜಾರಾಯ್ತದೆ... ಆದ್ರೆ ನಮ್ ಹೆಂಡ್ರು-ಮಕ್ಳು ಗಳು ಬದುಕ್ಬ್ಯಾದ್ವಾ.? '' ಅಂದ ಮಾಡರ್ನ್ ಸತ್ಯ ಹರಿಶ್ಚಂದ್ರ.

ನನಗೆ ಹೆಚ್ಚಿಗೇನು ಆಶ್ಚರ್ಯ ಆಗ್ಲಿಲ್ಲ. ಇದಕ್ಕಿಂತ ಹೆಚ್ಚಿನ ಕ್ರುಎಲ್ ರಿಯಾಲಿಟಿ ಗಳನ್ನೂ ಈಗಾಗಲೇ ನೋಡಿ ಬಿಟ್ಟಿದ್ದರಿಂದ. ಗಾಡಿ ಲಾಲ್ ಬಾಗ್ ಮೇನ್ ಗೇಟ್ ಬಳಿ ಟರ್ನ್ ತಗೊಂಡು ಬಸವನಗುಡಿ ಕಡೆಗೆ ಓಡತೊಡಗಿತು. ನನ್ನ ಜೀವನದ ಪ್ರಮುಖ ಘಟನೆಗಳಿಗೆ ಕಾರಣವಾದ ಗಾಂದಿ ಬಜಾರ ದ ಮೂಲಕ ಈ ಪರಿಸ್ಥಿತಿಯಲ್ಲಿ ಹೋಗ್ತಾ ಇರೋದು ನೋಡಿ ಒಂಥರಾ ಖುಷಿ ಯಾಗೆ ಇತ್ತು. ಬುದ್ದಿಯೇಲ್ಲದ ಜನ ಉಸಿರಾಡೋದು ನಿಲ್ಲಿಸಿದ ಕುಡ್ಲೆ ಮನುಷ್ಯ ಸತ್ತು ಹೋಗ್ತಾನೆ ಅಂತಾರೆ. ನಾನು ಸತ್ತೆ ಇಲ್ಲ ! ಎಲ್ಲಾ ನೋಡ್ತಾಯಿದೀನಿ, ಎಲ್ಲಾ ಕೇಳಿಸ್ತಾನೇ ಇದೆ. ಹೇಗೂ ಮನೆಗ್ ಹೋಗ್ತಿವಲ್ಲಾ ಅಲ್ಲಿ ಹೇಳಿದರಾಯ್ತು ಅಂತ ಸುಮ್ನೆ ಇದೀನಿ. ಅಮ್ಮ-ಅಕ್ಕ-ಶರಣ್ಯ ಇರ್ತಾರೆ, ಅಣ್ಣ as usual ಆಫೀಸ್ ಅಲ್ಲೇ ಇರ್ತಾನೆ. ಅಲ್ಲಿ ಹೇಳಿದ್ರಾಯ್ತು ಇದನೆಲ್ಲಾ, ' ಮನುಷ್ಯ ಸಾಯೋದು ಆಯಸ್ಸು ತೀರಿಯಲ್ಲ-ಆಸೆಗಳು ತೀರಿ'' ಅಂತ. ಗಾಡಿ ನ್ಯಾಷನಲ್ ಕಾ-ಆಪರೇಟಿವ್ ಬ್ಯಾಂಕ್ ಹತ್ರ ಸಿಗ್ನಲ್ ಗಾಗಿ ನಿಂತಿತು.
ಅರೆ ! ಮರೆತೇ ಹೋಗಿತ್ತು. ಈ ಬ್ಯಾಂಕ್ ಗೆ ನಾನು ಮೆಂಬರ್, ಎರಡು ವರ್ಷ ಗಳಿಂದ ಈ ಕಡೆ ತಲೇನೆ ಹಾಕಿಲ್ಲ. ಡಿವಿಡೆಂಡ್ ಕೂಡ ತಗೊಂಡಿಲ್ಲ. ಶರಣ್ಯಂಗೆ ಹೇಳ್ಬೇಕು ''ನೋಡು, ನಾನು ಸತ್ರೆ ಇದ್ನೆಲ್ಲಾ ಆದಷ್ಟು ಬೇಗ claim ಮಾಡ್ಕೋ, ಮೂರನೆ ವರ್ಶಾನು ಡಿವಿಡೆಂಡ್ ತಗೊಳ್ದೆ ಇದ್ರೆ ರಿಸರ್ವ್ ಫಂಡ್ ಗೆ ಟ್ರಾನ್ಸ್ಫರ್ ಮಾಡಿ ಬಿಡ್ತಾರೆ, ಹಾಗೆ LIC ಪಾಲಿಸಿಗಳಿಗೆ ಅಮ್ಮನ nominy ಮಾದೆದೀನಿ, ನಮ್ಮ ಮ್ಯಾರೇಜ್ ರೆಗಿಸ್ತ್ರಶನ್ ಸರ್ಟಿಫಿಕೇಟ್ produce ಮಾಡಿ claim ಮಾಡು, ಹಾಗೆ ಬ್ಯಾಂಕ್ accounts, ಗ್ರಾಚುತಿ , PF ದೂ ಕೂಡ. ಕಾರ್ ಲೋನ್ NOC ಬಂತಾ ? ಛೆ ! ಎಷ್ಟೊಂದು ಕೆಲ್ಸಾ ? ಹಾಗೇ Diary ನಲ್ಲಿ ಅರುಣ್, ಅಖಿಲ ಫೋನ್ ನಂಬರ್ ಇದೆ. ಏನಾದ್ರೂ ಹೆಲ್ಪ್ ಬೇಕಾದ್ರೆ . ಅಥವಾ ನಿಮ್ ತಂದೇನ ಒಂದೆರಡು ದಿನ ಬಂದು ಇರೋಕೆ ಹೇಳು.

ಅಯ್ಯೋ ! ಇದೆಲ್ಲಾ ನಾನು ಸತ್ತು ಹೋಗಿದೀನೀ ಅಂತ ಹೇಳ್ತಿಲ್ಲ ಮಾರಾಯ್ತಿ. ಸತ್ತಾಗ ನಿನಗೆ easy ಯಾಗಲೀ ಅಂತ ಹೇಳ್ತಾ ಇರೋದು. ಪಾಪಿ ಚಿರಾಯು ಕಣೇ ! ನಿನ್ನ ಕೆನ್ನೆ ಗಿಲ್ಲಿ-ಜಡೆ ಎಳೆದು ಇನ್ನು ಎಷ್ಟು ವರ್ಷ ಗೋಳು ಹುಯ್ಕೊಬೇಕೋ ಏನೋ ? ಇನ್ನು ನಾಲ್ಕು ಸ್ಕ್ರಿಪ್ಟ್ ಬಾಕಿ ಇದೆ. ಇನ್ನು ಎಷ್ಟೊಂದು ನಾಟ್ಕ ನೋಡ್ಬೇಕು ? ನೀನ್ ಬೇರೆ ಮತ್ತೆ ಡಾನ್ಸಿಗೆ ಸೇರ್ತಿನೀ ಅಂತಿದ್ಯಾ ! ನಿನ್ನ ಪ್ರಾಕ್ಟೀಸ್ ಗೆ ಅಂತ ಒಂದು ಹಾಲ್ ಕಟ್ಟಿಸಿಕೊಡ್ಬೇಕು... ಹಂಪ್ ಬಂತು ಅಂತ ಡ್ರೈವರ್ ಸಡನ್ ಬ್ರೇಕ್ ಹಾಕ್ದ, ವಾರ್ಡ್ ಬಾಯ್ ಬೀಳೋಕೆ ಹೋಗಿ ಸಂಭಾಳಿಸಿಕೊಂಡು ''ಶಿವೂ, ಹುಶರಪ್ಪ ಒಳಗೆ ಹೆಣ ಒಂದೇ ಅಲ್ಲಾ, ನಾನು ಇದೀನೀ ?'' ಅಂದ. ತೆಗೆದು ಬಾರಿಸಿಬಿಡೋಣ ಅನ್ನಿಸ್ತಾ ಇತ್ತು . ಪಾಪಿ ! ಹೆಣ ಅಂತಾನೆ. ಇನ್ಯಾವತ್ತು ಇವರ ಹಾಸ್ಪಿಟಲ್ ಗೆ ಕಾಲಿಡಬಾರದು. ಮನೇನೂ ಬಂತಲ್ಲಾ, ಶರಣ್ಯಂಗೆ ಹೇಳ್ಬೇಕು '' ಸುಂದ್ರಮ್ಮ, ಕೋಪ ಇದ್ರೆ ಬಯ್ದು ತೀರೀಸಿಕೋ, ಹಿಂಗೆಲ್ಲ ಡಬ್ಬ ಹಾಸ್ಪಿಟಲ್ ಗೆ ಸೇರಿಸಬೇದಾಂತ !'' ಮನೆ ಮುಂದೆ ಗಾಡಿ ನಿಲ್ತು. ಅಮ್ಮ ಅಳ್ತಾ ಇರೋದು ಕೇಳಿಸ್ತಾ ಇತ್ತು . ಅಷ್ಟರಲ್ಲಿ ಶರಣ್ಯ ಓಡಿಬಂದವಳು ಗೇಟಿನ ಬಳಿ ನಿಂತು ತಲೆ ಎತ್ತಿ ''ಅಮ್ಮಾ ! ಬಾಡಿ ಬಂತು'' ಅಂದ್ಲು.ಆಗ ಬಂತು ನನಗೆ ಸಾವು. ಕಾಲ ಒಮ್ಮೆಗೇ ಸ್ತಂಭಿಸಿದ ಹಾಗೇ... ಅಲ್ಲಿಯವರೆಗೂ ಕಾಣಿಸುತ್ತಾ ಇದ್ದದ್ದು-ಕೇಳಿಸುತ್ತಾ ಇದ್ದದ್ದು ಒಮ್ಮೆಲೇ ಸ್ತಬ್ಧ ಗೊಂಡು ನನ್ನ ಸಾವಿಗೆ ಅಧಿಕೃತ ವಾಗಿ ಚರಮಗೀತೆ ಹಾಡಿತು. ಕಣ್ಣಿನ ಅಂಚಿನಿಂದ ಹರಿದ ಎರಡು ಹನಿ ಕಣ್ಣೀರು ಒರೆಸುವವರಿಲ್ಲದೆ ಕೆನ್ನೆಯ ಮೇಲೆ ಕರೆಗಟ್ಟತೊಡಗಿತು. ನಾನು ಸತ್ತು ಹೋಗಿದ್ದೆ